Bhavanegalu
Hrudayadinda
Wednesday, May 25, 2022
Tuesday, July 7, 2020
ಬೆಂಗಳೂರು ಮತ್ತು ಜನರ ವಲಸೆ
ಈ ಒಂದು ವಾರದ ಹೊಸ ಬೆಳವಣಿಗೆ ಬೆಂಗಳೂರು ವಾಸಕ್ಕೆ ಯೋಗ್ಯವಿಲ್ಲ ಅಂತ ತಮ್ಮೂರಿಗೆ ಹೊರಟ ಜನರ ವಿಚಾರ ಚರ್ಚೆ ಆಗ್ತಿದೆ. ನಮ್ಮದೂ ಮೂಲ ಊರು ವಿಜಾಪುರವೇ ಆದರೂ ನನ್ನೂರು ಬೆಂಗಳೂರೇ ನಾನು ಹುಟ್ಟಿ ಬೆಳೆದ ನನ್ನ ಜೀವನ ರೂಪಿಸಿ ಕೊಂಡ ನನ್ನ ಮನೆ. ಯಾವುದೇ ಊರನ್ನು ನಾವು ಬಳಕೆಗೆ ಅವಕಾಶಕ್ಕೆ ಸೇರಿದಾಗ ಮತ್ತೊಂದು ಹುಡುಕೋದು ಸಹಜ. ಈಗ ಬೆಂಗಳೂರು ಬಿಟ್ಟು ಹೋದವರು ತಮ್ಮ ಸ್ವಂತ ಊರನ್ನು ಬಿಟ್ಟು ಬರುವಾಗ ಬೆಂಗಳೂರು ಒಂದು ಆಯ್ಕೆ ಎಂದು ಬಂದವರು ಅಷ್ಟೆ. ಬಹಳ ಜನ ಊರು ಬಿಟ್ಟು ಬೇರೆ ಊರಿಗೆ ಸೇರುವಾಗ ಕೆಲವು ಜನರಿಗೆ ತೊಂದರೆ ಆಗೋದು ಸಹಜ. ಆದರೂ ಪರಿಸ್ಥಿತಿ ಬದಲಾವಣೆ ಎಲ್ಲರಿಗೂ ಅನಿವಾರ್ಯ. ಸಾವಿಗೆ ಹೆದರಿ ಊರು ಬಿಟ್ಟವರು ಸಾವು ಎಲ್ಲೂ ತಮ್ಮ ಬೆನ್ನು ಬಿಡುವುದಿಲ್ಲ ಎಂಬ ಸತ್ಯವನ್ನು ಅರಿತಿರುವುದಿಲ್ಲ.
ಬೆಂಗಳೂರಿಗರೇ ಹಾಗೆ ಬಿಟ್ಟು ಹೋದ ವಲಸೆ ಜನರ ಬಗೆಗೆ ಆಡಿ ಕೊಳ್ಳುವುದು ಅಸಮಾಧಾನ ಪಡುವುದನ್ನು ಬಿಡಿ. ಏಕೆಂದರೆ ಹಿಂದೊಮ್ಮೆ ಟ್ರಾಫಿಕ್ ಸಮಸ್ಯೆಗಾಗಿ, ಬೆಲೆ ಏರಿಕೆಗಾಗಿ, ಪರಿಸರ ಮಾಲಿನ್ಯಕ್ಕಾಗಿ ಇವರನ್ನೇ ಅಲ್ಲವೇ ದೂಷಿಸಿದ್ದು?
ಯಾವ ಯಾವ ಸಮಯಕ್ಕೆ ಏನಾಗುತ್ತದೋ ಅದನ್ನು ಎದುರಿಸಲೇ ಬೇಕು. ಕಷ್ಟದ ಸಮಯ ಬಂದಾಗ ನಮ್ಮವರೊಂದಿಗೆ ಇರಲು ಹೊರಟಿದ್ದೇವೆ ಎಂದು ಅವರು ಹೇಳಿದಾಗ ನಮ್ಮ ಜಾಗ ನಮಗೆ ಕಡಿಮೆ ಬಾಡಿಗೆಗೆ ಸಿಕ್ಕಿತು ಎಂದು ಕೊಳ್ಳಿ. ನಮ್ಮ ಓಣಿಗಳಲ್ಲಿ ವಾಹನ ಸಂಚಾರ ಕಡಿಮೆಯಾಗಿ ನಮಗೆ ಶುದ್ಧ ಗಾಳಿ ನೀರು ಸಿಕ್ಕಿತು ಎಂದು ಕೊಳ್ಳಿ.
ಜೀವನದಲ್ಲಿ ಯಾವುದೇ ಪರಿಸ್ಥಿತಿ ಬಂದಾಗ ಎಂದಿಗೂ ಎರಡು ರೀತಿಯ ಪ್ರಭಾವ ಇರುತ್ತದೆ. ಒಂದು ಸಕಾರಾತ್ಮಕ ಮತ್ತೊಂದು ನಕಾರಾತ್ಮಕ. ಸಕಾರಾತ್ಮಕವಾದ ವಿಚಾರ ಮಾಡುವವನು ಎಲ್ಲ ಸಂದರ್ಭವನ್ನು ಎದುರಿಸುವ ವಿಚಾರ ಮಾಡಿದರೆ ನಕಾರಾತ್ಮಕ ವಿಚಾರದವನು ತಾನೊಬ್ಬನೇ ಅಲ್ಲದೇ ತನ್ನೊಂದಿಗಿರುವ ನಾಲ್ಕಾರು ಜನರನ್ನೂ ಹೆದರಿಸುತ್ತಾನೆ ಮೊದಲು ನಾವು ಸಕಾರಾತ್ಮಕವಾಗಿ ಬದುಕೋಣ. ಬೆರೆಯವರ ಬಗೆಗೆ ನಂತರ ಯೋಚಿಸೋಣ. ಮನೆಯಲ್ಲೇ ಇರೋಣ. ಆರೋಗ್ಯವಂತರಾಗಿ ಇರೋಣ
ಬೆಂಗಳೂರಿಗರೇ ಹಾಗೆ ಬಿಟ್ಟು ಹೋದ ವಲಸೆ ಜನರ ಬಗೆಗೆ ಆಡಿ ಕೊಳ್ಳುವುದು ಅಸಮಾಧಾನ ಪಡುವುದನ್ನು ಬಿಡಿ. ಏಕೆಂದರೆ ಹಿಂದೊಮ್ಮೆ ಟ್ರಾಫಿಕ್ ಸಮಸ್ಯೆಗಾಗಿ, ಬೆಲೆ ಏರಿಕೆಗಾಗಿ, ಪರಿಸರ ಮಾಲಿನ್ಯಕ್ಕಾಗಿ ಇವರನ್ನೇ ಅಲ್ಲವೇ ದೂಷಿಸಿದ್ದು?
ಯಾವ ಯಾವ ಸಮಯಕ್ಕೆ ಏನಾಗುತ್ತದೋ ಅದನ್ನು ಎದುರಿಸಲೇ ಬೇಕು. ಕಷ್ಟದ ಸಮಯ ಬಂದಾಗ ನಮ್ಮವರೊಂದಿಗೆ ಇರಲು ಹೊರಟಿದ್ದೇವೆ ಎಂದು ಅವರು ಹೇಳಿದಾಗ ನಮ್ಮ ಜಾಗ ನಮಗೆ ಕಡಿಮೆ ಬಾಡಿಗೆಗೆ ಸಿಕ್ಕಿತು ಎಂದು ಕೊಳ್ಳಿ. ನಮ್ಮ ಓಣಿಗಳಲ್ಲಿ ವಾಹನ ಸಂಚಾರ ಕಡಿಮೆಯಾಗಿ ನಮಗೆ ಶುದ್ಧ ಗಾಳಿ ನೀರು ಸಿಕ್ಕಿತು ಎಂದು ಕೊಳ್ಳಿ.
ಜೀವನದಲ್ಲಿ ಯಾವುದೇ ಪರಿಸ್ಥಿತಿ ಬಂದಾಗ ಎಂದಿಗೂ ಎರಡು ರೀತಿಯ ಪ್ರಭಾವ ಇರುತ್ತದೆ. ಒಂದು ಸಕಾರಾತ್ಮಕ ಮತ್ತೊಂದು ನಕಾರಾತ್ಮಕ. ಸಕಾರಾತ್ಮಕವಾದ ವಿಚಾರ ಮಾಡುವವನು ಎಲ್ಲ ಸಂದರ್ಭವನ್ನು ಎದುರಿಸುವ ವಿಚಾರ ಮಾಡಿದರೆ ನಕಾರಾತ್ಮಕ ವಿಚಾರದವನು ತಾನೊಬ್ಬನೇ ಅಲ್ಲದೇ ತನ್ನೊಂದಿಗಿರುವ ನಾಲ್ಕಾರು ಜನರನ್ನೂ ಹೆದರಿಸುತ್ತಾನೆ ಮೊದಲು ನಾವು ಸಕಾರಾತ್ಮಕವಾಗಿ ಬದುಕೋಣ. ಬೆರೆಯವರ ಬಗೆಗೆ ನಂತರ ಯೋಚಿಸೋಣ. ಮನೆಯಲ್ಲೇ ಇರೋಣ. ಆರೋಗ್ಯವಂತರಾಗಿ ಇರೋಣ
ವಿಷಯ :- ಹೆತ್ತವರ ಮುಪ್ಪಿನಲ್ಲಿ ಮಕ್ಕಳ ಕರ್ತವ್ಯ
ಈಗಿನ ಕಾಲದಲ್ಲಿ ಬಹಳ ಸೂಕ್ಷ್ಮ ವಿಷಯ. ಮೊದಲೆಲ್ಲಾ ತಂದೆ ತಾಯಿಯರನ್ನು ಬಿಟ್ಟು ಇರುವ ಕಲ್ಪನೆ ಇರಲೇ ಇಲ್ಲ. ತಂದೆ ತಾಯಿಯರ ಒಡನಾಟ ಸಾನಿಧ್ಯ ಇದು ಸಣ್ಣ ಮಕ್ಕಳಾದಾಗ ನಮ್ಮ ಅವಶ್ಯಕತೆ ಇರುವ ಹಾಗೆ ವಯಸ್ಸಾದ ಮೇಲೆ ಅವರನ್ನು ನೋಡಿ ಕೊಳ್ಳುವುದು ಅವರ ಊಟ ಬಟ್ಟೆ ಅಷ್ಟೆ ಅಲ್ಲ ಅವರ ಎಲ್ಲ ಬೇಕು ಬೇಡಗಳನ್ನು ನೋಡಿ ಕೊಳ್ಳುವುದು ಸದಾ ಅವರಿಗೆ ಒಂಟಿಯಾಗಿರಲು ಬಿಡದೇ ನೋಡಿ ಕೊಳ್ಳುವುದು ಯುವ ಜನರ ಕರ್ತವ್ಯವಾಗಿದೆ.
ನಾವು ಹುಟ್ಟಿದಾಗಿನಿಂದ ನಮ್ಮ ಬೇಕು ಬೇಡಗಳನ್ನು ನಾವು ಕೇಳುವ ಮೊದಲೇ ಒದಗಿಸಿದ ಅವರಿಗೆ ಅವರ ವಯಸ್ಸಾದ ಕಾಲದಲ್ಲಿ ಅವರ ಅವಶ್ಯಕತೆ ಅನುಕೂಲತೆಯ ವಿಚಾರ ಮಾಡಿ ನಮ್ಮ ಬದುಕಿನಲ್ಲಿ ಸಣ್ಣ ಮಾರ್ಪಾಡು ಮಾಡಿಕೊಳ್ಳುವುದರಲ್ಲಿ ಯಾವ ದೊಡ್ಡ ಉಪಕಾರದ ಕೆಲಸವಾಗಿರುವುದಿಲ್ಲ. ಅದು ನಮ್ಮ ಕರ್ತವ್ಯವಾಗಿರುತ್ತದೆ. ಈಗಿನ ಕಾಲದ ಹೊಸ ಹೊಸ ತಂತ್ರಜ್ಞಾನ ಅಥವಾ ಪದ್ಧತಿಗಳಿಗೆ ಅವರು ಒಗ್ಗಿಕೊಂಡಿಲ್ಲವೆಂದರೆ ಅವರು ದಡ್ಡರೆಂದಲ್ಲ ಅವರು ಸಂಪೂರ್ಣ ಚಟುವಟಿಕೆಯಿಂದ ಇರುವಾಗ ಇತ್ತೀಚಿನ ತಂತ್ರಜ್ಞಾನಗಳ ಅವಿಷ್ಕಾರವಾಗಿದ್ದಲ್ಲಿ ಅವರು ನಮಗಿಂತ ಹೆಚ್ಚು ಸಮಂಜಸವಾಗಿ ಬಳಸುತ್ತಿದ್ದರು. ನಮ್ಮ ಹೆತ್ತವರು ವಯಸ್ಸಾದ ಮೇಲೆ ನಮ್ಮ ಮಕ್ಕಳು ಮತ್ತು ಹೆತ್ತವರು ಇಬ್ಬರನ್ನೂ ಸಮ ಭಾವದಿಂದ ನೋಡಿಕೊಳ್ಳಬೇಕು.
ಮಕ್ಕಳಿಗೆ ತೋರಿಸುವಷ್ಟೇ ಪ್ರೀತಿ ವಿಶ್ವಾಸ ಮತ್ತು ಕಾಳಜಿಯನ್ನು ವೃದ್ಧ ತಂದೆ ತಾತಿಯರಿಗೂ ತೋರಿಸಬೇಕು. ವ್ಯತ್ಯಾಸ ಇಷ್ಟೆ ಮಕ್ಕಳು ತಪ್ಪು ಮಾಡಿದಾಗ ಅವರಿಗೆ ತಾಡಿಸಬಹುದು ಆದರೆ ಹೆತ್ತವರಿಗೆ ತಿಳಿಸಿ ಹೇಳಬೇಕು. ಇನ್ನೊಂದು ಮುಖ್ಯವಾಗಿ ಹೆತ್ತವರಿಗೆ ತೋರಿಸಬೇಕಾದದ್ದು ಗೌರವವನ್ನು, ಇಂದಿನ ಯುವ ಸಮಾಜದಲ್ಲಿ ತಂದೆ ತಾಯಿಯರ ಬಗೆಗೆ ಅಸಡ್ಡೆ ಬಹಳವಾಗುತ್ತಿದೆ. ಕಟ್ಟ ಕಡೆಯ ಸತ್ಯವೆಂದರೆ ನಾವು ಕೂಸಾಗಿದ್ದಾಗಿನಿಂದ ನಮ್ಮನ್ನು ಇಷ್ಟು ಯೋಗ್ಯರನ್ನಾಗಿ ಮಾಡಿದ ಆ ಪೂಜ್ಯರನ್ನು ಮಕ್ಕಳಂತೆ ಲಾಲಿಸಿ, ಪ್ರೀತಿಸಿ ನಡೆದಾಡುವ ದೇವರಂತೆ ಪೂಜಿಸಿದಾಗ ನಮ್ಮ ಕರ್ತವ್ಯವನ್ನು ನಾವು ಮಾಡಿದಂತೆ.
ಜೀವಂತ ಇರುವಾಗ ಅವರ ಬಗ್ಗೆ ಅಸಡ್ಡೆ ತೋರುವುದು, ದೂಷಿಸುವುದು, ಅವಮಾನ ಮಾಡುವುದು ಅವರ ಮನಸ್ಸಿಗೆ ನೋಯಿಸಿ ನಂತರ ಶ್ರಾದ್ಧಾದಿಗಳನ್ನು ಮಾಡಿ ದಾನ ಧರ್ಮಗಳನ್ನು ಮಾಡಿ ದೊಡ್ಡ ದೊಡ್ಡ ಭಾವಚಿತ್ರ ಇಟ್ಟು ಹಾರ ಹಾಕುವುದಕ್ಕಿಂತ ಇದ್ದಾಗ ಪ್ರೀತಿಸಿ, ಪೂಜಿಸಿ, ಲಾಲಿಸಿ ಅವರ ಪ್ರೀತಿ ಪಾತ್ರರಾಗುವುದು ಯುವ ಜನರ ಕರ್ತವ್ಯ
Sunday, May 17, 2020
ವಿಧಿಪಿತ ನೋನಲ್ಲದೆ ನಿಧಿಪತಿಗಳು ಉಂಟೆ|
ಸಧನನಾಗಿ ಇಪ್ಪೆ ನಿನ್ನ ದಾಸರಿಗಾಗಿ|
ಮಧುಸೂದನ ಜಗನ್ನಾಥವಿಠ್ಠಲರೇಯ |
ನಿಧನನೆನಿಸಿ ಕೊಂಡೆ ನಿನ್ನ ದ್ವೇಷಿಗಳಿಗೆ || 2 ||
ಬ್ರಹ್ಮಾದಿ ದೇವತೆಗಳಿಗೆ ತಂದೆಯಾದ ನಿನ್ನಷ್ಟು ದೊಡ್ಡ ನಿಧಿಪತಿಯು ಬೇರೆಯಾರಿದ್ದಾರೆ? ನಿನ್ನ ನಂಬಿ ಬಂದಂತಹ ಭಕ್ತರಿಗೆ ಸದಾ ಧನೌಂತನಾಗಿದ್ದು ಸಂಪತ್ಪ್ರದಾಯಕ
ನಾಗಿರುವ ನೀನು, ನಿನ್ನನ್ನು ದ್ವೇಷಿಸುವ ಶತೃಗಳಿಗೆ ಮರಣ ಸದೃಶವಾಗಿರುವೆ.
ನರಸಿಂಹ ಸುಳಾದಿ
ದುರಿತವನ ಕುಠಾರಿ ದುರ್ಜನ ಕುಲವೈರಿ|
ಶರಣಾಗತ ವಜ್ರ ಪಂಜರ ಕುಂಜರ-1|
ವರ ಸಂರಕ್ಷಕ ಜನ್ಮಮರಣ ರಹಿತ ಮಹಿತ|
ಪರಮ ಕರುಣಾ ಸಿಂಧು ಭಕ್ತ ಬಂದು|
ಸ್ವರತ ಸ್ವತಂತ್ರ ಜಗದ್ಭರಿತ ಚಿತ್ಸುಖ ಪೂರ್ಣ|
ಉರುಗಾಯ ವೈಕುಂಠವರ ಮಂದಿರ ಚಂದಿರ|
ಹರಿಯೆ ಕ್ಷರಾಕ್ಷರ ಪುರುಷೋತ್ತಮ|
ತರಣಿಕೋಟಿ ಸಂಕಾಶ ವಿಮಲಕೇಶ|
ಧುರಗದೊಳಗರ್ಜುನನ ತುರಗ ನಡೆಸಿದ ಸಂ-|
ಗರ ಭಯಂಕರ ಲೋಕೈಕಧೀರ|
ನರಸಿಂಹ ನಿನ್ನ ಪಾದಕೆರಗಿ ಬೇಡಕೊಂಬೆ|
ಮೊರೆ ಹೊಕದಾಸಗೆ ಬಂದ ಭಯವ |
ಪರಿಹಸಿರಿ ಸೌಖ್ಯವ ಕರುಣಿಸು ದಯದಿಂದ|
ಸರುವಂತರ್ಯಾಮಿ ಲೋಕ ಸ್ವಾಮಿ|
ಸ್ಮರಣೆ ಮಾತ್ರದಿ ಅಜಮಿಳಗೆ ಮುಕ್ತಿಯನಿತ್ತೆ|
ಅರಿದೆನೊ ನೀನೀಗ ಪೊರೆವುದೆಮ್ಮೆ |
ಸರುವ ಕಾಮದ ಜಗನ್ನಾಥವಿಠ್ಠಲ ಭಕ್ತ ಪರಿಪಾಲಕನೆಂಬ ಬಿರುದು ನಿನ್ನದ್ದವೆ || 1 ||
ಇದು ದಾಸ ಶ್ರೇಷ್ಠರಾದ ಶ್ರೀ ಜಗನ್ನಾಥ ದಾಸರು ರಚಿಸಿದ ನರಸಿಂಹ ಸುಳಾದಿಯ ಮೊದಲನೆಯ
ನುಡಿಯಾಗಿದೆ. ಇದರಲ್ಲಿ ಭಗವಂತನ ಸ್ತುತಿಯನ್ನು ಮಾಡುತ್ತಾ ಅವನ ಮಹಿಮೆಗಳನ್ನು ಕೊಂಡಾಡುತ್ತಾರೆ. ಭಗವಂತನ ಕಷ್ಟಗಳೆಂಬ ಕಾಡಿಗೆ
ಕೊಡಲಿಯಂತೆ, ದುರ್ಜನರ ಕುಲಕ್ಕೆ ವೈರಿಯೂ, ಶರಣಾಗತನಾದ
ಭಕ್ತನಿಗೆ ಗಜೇಂದ್ರನನ್ನು ರಕ್ಷಿಸಿದಂತೆ ರಕ್ಷಿಸುವ ಕರುಣಾ ಮಯ, ಅವನು
ಸ್ವರತ, ಸ್ವತಂತ್ರ, ಜಗತ್ತನ್ನೆಲ್ಲಾ
ಆವರಿಸಿರುವವ, ಕ್ಷರಾಕ್ಷರ, ಪುರುಷೋತ್ತಮ, ಶೇಷ ಶಯನ,
ವೈಕುಂಠದಲ್ಲಿ ವಾಸವಾಗಿರುವವ, ಧರೆಯೊಳಗೆ ಅರುಜನನ
ಸಾರಥಿಯೆನಿಸಿದವ ನರಸಿಂಹ ದೇವರೇ ನಿಮ್ಮ ಪಾದಕ್ಕೆರಗಿ ನಮಿಸುವೆ, ನಿನ್ನನ್ನು
ಮೊರೆ ಹೊಕ್ಕಿರುವ ದಾಸಗೆ ಬಂದಿರುವ ಭಯವನನು ಪರಿಹರಿಸಿ ಸಲುಹು, ನೀನು
ಸರ್ವಂತರ್ಯಾಮಿ, ಲೋಕಕ್ಕೆಲ್ಲಾ ಸ್ವಾಮಿ ನಿನ್ನನ್ನು ಸ್ಮರಣೆ ಮಾಡಿದ
ಅಜಮಿಳಗೆ ಮುಕ್ತಿಯನ್ನು ನೀಡಿದ ನಿನಗೆ ಶರಣು ಬಂದಿರುವ ಭಕ್ತನ ಪೊರೆಯುವ ಹೇ ಜಗನ್ನಾಥವಿಠ್ಠಲ
ಸ್ವಾಮಿ ಭಕ್ತ ಪರಿಪಾಲಕನೆಂಬ ಬಿರುದನ್ನನು ಹೊಂದಿರುವ ನೀನು ನಮ್ಮನ್ನು ಸಲಹು ಎಂಬುದಾಗಿ
ಪ್ರಾರ್ಥಿಸುತ್ತಾರೆ.
Monday, May 4, 2020
ಆತ್ಮ ಸಮ್ಮಾನ ಅಥವಾ ಗೌರವ
ಏನು ಹೀಗೆ ಅಂದರೆ ? ನಮ್ಮ ದೃಷ್ಟಿಯಲ್ಲಿ ನಾವು ಗೌರವಾನ್ವಿತರಾಗಿ ಉಳಿಯುವುದು. ಯಾವುದೇ ಕೆಟ್ಟ ಹಾದಿಯಲ್ಲಿ ನಡೆಯದೇ ನಮ್ಮತನವನ್ನು ಉಳಿಸಿ ಕೊಳ್ಳುವುದು. ಆಂಗ್ಲ ಭಾಷೆಯಲ್ಲಿ ಇದಕ್ಕೆ ಸೆಲ್ಫ ರೆಸ್ಪೆಕ್ಟ ಅಂತಾರೆ. ನಮಗೆ ನಾವೇ ಬೆಲೆ ಕೊಡದೇ ಇದ್ದರೆ ಬೆರೆಯವ್ರು ಹೇಗೆ ಕೊಟ್ಟಾರು ಅಲ್ಲವೇ? ವ್ಯಕ್ತಿ ಹೆಣ್ಣೆ ಇರಲಿ ಗಂಡೇ ಇರಲಿ ಬೇರೆಯವರ ಅಡಿ ಆಳು ಅಥವಾ ಬೇರೆಯವರ ಕೈಗೊಂಬೆಯಾಗಿ ಬಾಳುವುದಕ್ಕಿಂತ ಕಷ್ಟ ಪಟ್ಟು ದುಡಿದು ಆತ್ಮ ಗೌರವದಿಂದ ಬದುಕುವುದು ಉತ್ತಮ ಜೀವನ. ಮತ್ತೊಬ್ಬರ ಹಂಗಿನಲ್ಲಿ ನಮಗೆ ಯಾವುದೇ ಬೆಲೆ ಇಲ್ಲದೇ ಬದುಕುವ ಬದುಕು ಹೀನವಾದುದು. ನಮ್ಮತನವಿಲ್ಲದೇ ಒಂದು ಕೀಲು ಗೊಂಬೆಯಾಗಿ ಬಾಳುವುದು, ಮತ್ತೊಬ್ಬರ ಕೈ ಗೊಂಬೆಯಾಗುವುದಕ್ಕಿಂತ ಆತ್ಮ ಗೌರವದಿಂದ ಸಾಯುವುದು ಲೇಸು
ಇಂದಿನ ಪ್ರಪಂಚದಲ್ಲಿ ಈ ರೀತಿ ಆತ್ಮ ಗೌರವದಿಂದ ಬದುಕಲು ಪ್ರಯತ್ನಿಸುವವರು ಔಟ್ಡೇಟೆಡ್ ಎಂಬ ಭಾವನೆ ಇದೆ. ಯಾಕೆಂದರೆ ಎಲ್ಲರೂ ಹೊಗಳು ಭಟ್ಟರು, ಕಾರ್ಯವಾಸಿ ಕತ್ತೆ ಕಾಲು ಹಿಡಿಯಬಹುದೆಂಬ, ಅಥವಾ ಹಣ ಅಧಿಕಾರ ಇರುವವರು ತಾವು ಏನನ್ನಾದರೂ ಕೊಂಡು ಕೊಂಡೇವು ಎನ್ನುವ ಸೊಕ್ಕು ಮಾತನಾಡಿಸುತ್ತದೆ. ಯಾವುದೇ ಸಂಬಂಧವಿರಲಿ ವ್ಯಕ್ತಿ ಇರಲಿ ಪರಸ್ಪರ ಗೌರವ, ವಿಶ್ವಾಸವಿದ್ದಾಗ ಮಾತ್ರ ಜೀವನ ಸುಗಮ.
ಹೆಣ್ಣು ಮಕ್ಕಳಂತೂ ಹೆಜ್ಜೆ ಹೆಜ್ಜೆಗೂ ಆತ್ಮ ಸಮ್ಮಾನ ಅಥವಾ ಗೌರವಕ್ಕಾಗಿ ಹೋರಾಡುವ ಪರಿಸ್ಥಿತಿ ದಿನ ನಿತ್ಯವೂ ಇದೆ. ಸಾಮಾಜ ಹೆಣ್ಣಿಗೆ ಕ್ಷಮಯಾ ಧರಿತ್ರಿ ಅಂತ ಕಲಿಸಲು ಪ್ರಯತ್ನಿಸುತ್ತದೆ ಆದರೆ ಗಂಡಿನ ರಾವಣ ಕಂಸನಾಗ ಬೇಡ ಎನ್ನುವುದಿಲ್ಲ. ಇರಲಿ ಹೊಂದಿಕೊಂಡು ಹೋಗು ಅನ್ನುವುದು ಸರ್ವೇ ಸಾಮಾನ್ಯ ಹಾಗೆಂದು ದಬ್ಬಾಳಿಕೆಯನ್ನು ಮಾಡದ ಹೆಣ್ಣು ಮಕ್ಕಳಿದ್ದಾರೆ ಎಂದುಕೊಳ್ಳಬೇಡಿ ಅವರ ಸಂಖ್ಯೆಯೂ ಕಡಿಮೆ ಇಲ್ಲ.
ಆದರೆ ಆತ್ಮಗೌರವನ್ನು ಹೆಣ್ಣಾಗಲಿ ಗಂಡಾಗಲಿ ಬಿಡಬಾರದು. ನಮಗೆ ಬೆಲೆ ಇಲ್ಲದ ಜಾಗದಲ್ಲಿ ಇರಬಾರದು. ಸ್ವಾಭಿಮಾನವನ್ನು ಬಿಟ್ಟು ಬದುಕಿದರೆ ಜೀವಂತ ಶವಕ್ಕೆ ಸಮ
ಮಾಧುರಿ
Tuesday, April 28, 2020
ಪೀತಿ
ನಮ್ಮ ಕನ್ನಡ ಭಾಷೆ ಬಹಳ ವಿಶಾಲವಾದದ್ದು, ಒಂದೇ ಪದಕ್ಕೆ ಹತ್ತಾರು ಭಾವನೆಗಳನ್ನು ಬಳಸಬೇಕು ಅಂತಿಲ್ಲ. ಅದಕ್ಕೆ ಉತ್ತಮ ಉದಾಹರಣೆ ಈ ಪ್ರೀತಿ ಎನ್ನುವ ಪದ. ಆಂಗ್ಲದಲ್ಲಿ ಲವ್ ಅಂದರೆ ಪ್ರೀತಿ, ಪ್ರೇಮ, ಪ್ರಣಯ ಹೀಗೆ ಬಹಳಷ್ಟು ಪದಗಳ ಸಮಾನಾರ್ಥಕ ಪದವಾಗುತ್ತದೆ. ನಮ್ಮಲ್ಲಿ ತಾಯಿ ಮಕ್ಕಳ ಪ್ರೀತಿಗೆ ವಾತ್ಸಲ್ಯ ಎನ್ನುತ್ತೇವೆ, ಹುಡುಗ-ಹುಡುಗಿ ಪ್ರೀತಿಗೆ ಪ್ರಣಯ ಅನ್ನುತ್ತೇವೆ. ನಮ್ಮಲ್ಲಿ ಒಂದೇ ಭಾವಕ್ಕೆ ಹಲವಾರು ಪದಗಳು. ಪ್ರೀತಿಯ ಅರ್ಥ ಖಚಿತವಾಗಿ ಹೇಳಲು ಕಷ್ಟು ಸಾಮಾನ್ಯವಾಗಿ ನಮಗೆ ಯಾರಾದರೂ ಒಬ್ಬರನ್ನೋ ಅಥವಾ ಯಾವುದೇ ವಸ್ತುವನ್ನು ಬಿಟ್ಟಿರಲಾರದಷ್ಟು ಮೋಹ ಬಂದರೆ ಅದನ್ನು ಪ್ರೀತಿ ಎಂದು ಅರ್ಥ ಮಾಡಿಕೊಳ್ಳುತ್ತೇವೆ.
ಪ್ರಪಂಚ ನಡೆಯುವುದೇ ಈ ಪ್ರೀತಿಯ ಆಧಾರದ ಮೇಲೆ, ಮಗು ಮೊದಲು ಕಾಣುವುದೇ ತಾಯಿಯ ಪ್ರೀತಿಯನ್ನು, ನಂತರ ತಂದೆ, ಸಹೋದರ, ಸಹೋದರಿಯರು, ಬಂಧು ಬಾಂಧವರು, ನಂತರ ಶಿಕ್ಷಕರು, ಸ್ನೇಹಿತರು ಹೀಗೆ ಪ್ರೀತಿ ತೋರುವ ಜನರ ಸಂಖ್ಯೆ ಬೆಳೆಯುತ್ತಾ ಹೋಗುತ್ತದೆ. ಸಣ್ಣ ಮಕ್ಕಳಿದ್ದಾಗ ಈ ಪ್ರೀತಿ ಎಂದರೆ ಏನು ನಾವು ಯಾರನ್ನು ಪ್ರೀತಿಸುತ್ತೇವೆ ನಮ್ಮ ಜೀವನದಲ್ಲಿ ಪ್ರೀತಿ ಪಾತ್ರರು ಯಾರು ಎಂಬ ಅರಿವೇ ಇರುವುದಿಲ್ಲ. ದಿನಗಳೆದಂತೆ ತಿಳುವಳಿಕೆ ಬಂದಂತೆ ಪ್ರೀತಿಯ ಭಾವ ಮನಸ್ಸಿನಲ್ಲಿ ಜಾಗೃತವಾಗುತ್ತದೆ ಮತ್ತು ನಮ್ಮನ್ನು ಯಾರಾದರೂ ಪ್ರೀತಿ ಮಾಡಲಿ ಎಂದು ಭಾವನೆ ಸಹಜವಾಗಿ ಹುಟ್ಟುತ್ತದೆ. ಆಗ ಪ್ರೀತಿಯ ಹುಡುಕಾಟ ಆರಂಭವಾಗುತ್ತದೆ.
ಪ್ರೀತಿಯ ಬಗೆಗೆ ಎಲ್ಲ ಭಾಷೆಗಳಲ್ಲೂ ಕವಿತೆಗಳನ್ನು ಎಷ್ಟೋ ಜನ ಕವಿಗಳು ಬರೆದಿದ್ದಾರೆ. ನನಗೆ ಮನಸ್ಸಿಗೆ ಹಿಡಿಸಿದ್ದು ಜಯಶಂಕರ ಪ್ರಸಾದರ "ಮುಝೆ ಪ್ಯಾರರ್ ನ ಮಿಲಾ" ಎಂಬ ಕವಿತೆ ಆ ಕವಿತೆಯ ಆಶಯ ಕವಿ ಒಮ್ಮೆ ಪ್ರೀತಿಯನ್ನು ಹುಡುಕಲು ಹೊರಡುತ್ತಾರೆ ಅವರಿಗೆ ಎಲ್ಲ ಪ್ರೀತಿ ಸಿಗುತ್ತಿಲ್ಲ ಎಂಬ ಭಾವನೆ ಬರುತ್ತದೆ ಅದೇ ನಿಟ್ಟಿನಲ್ಲಿ ಅವರು ಯೋಚಿಸುತ್ತಿರುವಾಗ ಅವರಿಗೆ ಅನಿಸುತ್ತದೆ, ಇಷ್ಟು ದಿನ ನನ್ನನ್ನೇ ಪ್ರೀತಿ ಮಾಡಲಿ ಎಂದು ಹೊರಟಿದ್ದೆ ಆದ್ದರಿಂದ ಸಿಗುತ್ತಿಲ್ಲ, ನಾನು ಬೇರೆಯವರನ್ನು ಪ್ರೀತಿಸಿದಾಗ ಸಿಗಬಹುದೇನೋ ಎನ್ನುತ್ತಾರೆ.
ಬನ್ನಿ ಪ್ರೀತಿ ಹಂಚೋಣ. ನಿಸ್ವಾರ್ಥ ಪ್ರೀತಿಗೆ ಕಳೆದು ಕೊಳ್ಳೋದು ಏನು ಇಲ್ಲ, ಮಾನವೀಯತೆ, ಸೌಹಾರ್ದತೆ ಎಂಬ ದೊಡ್ಡ ದೊಡ್ಡ ಶಬ್ದ ಎಲ್ಲಾ ಬೇಡ. ಜೀವನಕ್ಕೆ ಸರಳ ದಾರಿ ಜೀವನದಲ್ಲಿ ಬರುವ ಎಲ್ಲ ವ್ಯಕ್ತಿಗಳನ್ನು ಪ್ರೀತಿಸಿ ನಮಗೆ ಅಂತ ದೊರೆತ ವಸ್ತುಗಳನ್ನು ಪ್ರೀತಿಸಿ ಯಾರಾದರೂ ಪ್ರೀತಿ ತೋರಿಸುತ್ತಾರೆ. ಪ್ರೀತಿ ಜೀವನದ ಸಾರ. ಜೀವನವನ್ನು ಪ್ರೀತಿಸೋಣ, ಜೀವಿಗಳನ್ನು ಪ್ರೀತಿಸೋಣ.
ಮಾಧುರಿ
Subscribe to:
Posts (Atom)