ಈ ಒಂದು ವಾರದ ಹೊಸ ಬೆಳವಣಿಗೆ ಬೆಂಗಳೂರು ವಾಸಕ್ಕೆ ಯೋಗ್ಯವಿಲ್ಲ ಅಂತ ತಮ್ಮೂರಿಗೆ ಹೊರಟ ಜನರ ವಿಚಾರ ಚರ್ಚೆ ಆಗ್ತಿದೆ. ನಮ್ಮದೂ ಮೂಲ ಊರು ವಿಜಾಪುರವೇ ಆದರೂ ನನ್ನೂರು ಬೆಂಗಳೂರೇ ನಾನು ಹುಟ್ಟಿ ಬೆಳೆದ ನನ್ನ ಜೀವನ ರೂಪಿಸಿ ಕೊಂಡ ನನ್ನ ಮನೆ. ಯಾವುದೇ ಊರನ್ನು ನಾವು ಬಳಕೆಗೆ ಅವಕಾಶಕ್ಕೆ ಸೇರಿದಾಗ ಮತ್ತೊಂದು ಹುಡುಕೋದು ಸಹಜ. ಈಗ ಬೆಂಗಳೂರು ಬಿಟ್ಟು ಹೋದವರು ತಮ್ಮ ಸ್ವಂತ ಊರನ್ನು ಬಿಟ್ಟು ಬರುವಾಗ ಬೆಂಗಳೂರು ಒಂದು ಆಯ್ಕೆ ಎಂದು ಬಂದವರು ಅಷ್ಟೆ. ಬಹಳ ಜನ ಊರು ಬಿಟ್ಟು ಬೇರೆ ಊರಿಗೆ ಸೇರುವಾಗ ಕೆಲವು ಜನರಿಗೆ ತೊಂದರೆ ಆಗೋದು ಸಹಜ. ಆದರೂ ಪರಿಸ್ಥಿತಿ ಬದಲಾವಣೆ ಎಲ್ಲರಿಗೂ ಅನಿವಾರ್ಯ. ಸಾವಿಗೆ ಹೆದರಿ ಊರು ಬಿಟ್ಟವರು ಸಾವು ಎಲ್ಲೂ ತಮ್ಮ ಬೆನ್ನು ಬಿಡುವುದಿಲ್ಲ ಎಂಬ ಸತ್ಯವನ್ನು ಅರಿತಿರುವುದಿಲ್ಲ.
ಬೆಂಗಳೂರಿಗರೇ ಹಾಗೆ ಬಿಟ್ಟು ಹೋದ ವಲಸೆ ಜನರ ಬಗೆಗೆ ಆಡಿ ಕೊಳ್ಳುವುದು ಅಸಮಾಧಾನ ಪಡುವುದನ್ನು ಬಿಡಿ. ಏಕೆಂದರೆ ಹಿಂದೊಮ್ಮೆ ಟ್ರಾಫಿಕ್ ಸಮಸ್ಯೆಗಾಗಿ, ಬೆಲೆ ಏರಿಕೆಗಾಗಿ, ಪರಿಸರ ಮಾಲಿನ್ಯಕ್ಕಾಗಿ ಇವರನ್ನೇ ಅಲ್ಲವೇ ದೂಷಿಸಿದ್ದು?
ಯಾವ ಯಾವ ಸಮಯಕ್ಕೆ ಏನಾಗುತ್ತದೋ ಅದನ್ನು ಎದುರಿಸಲೇ ಬೇಕು. ಕಷ್ಟದ ಸಮಯ ಬಂದಾಗ ನಮ್ಮವರೊಂದಿಗೆ ಇರಲು ಹೊರಟಿದ್ದೇವೆ ಎಂದು ಅವರು ಹೇಳಿದಾಗ ನಮ್ಮ ಜಾಗ ನಮಗೆ ಕಡಿಮೆ ಬಾಡಿಗೆಗೆ ಸಿಕ್ಕಿತು ಎಂದು ಕೊಳ್ಳಿ. ನಮ್ಮ ಓಣಿಗಳಲ್ಲಿ ವಾಹನ ಸಂಚಾರ ಕಡಿಮೆಯಾಗಿ ನಮಗೆ ಶುದ್ಧ ಗಾಳಿ ನೀರು ಸಿಕ್ಕಿತು ಎಂದು ಕೊಳ್ಳಿ.
ಜೀವನದಲ್ಲಿ ಯಾವುದೇ ಪರಿಸ್ಥಿತಿ ಬಂದಾಗ ಎಂದಿಗೂ ಎರಡು ರೀತಿಯ ಪ್ರಭಾವ ಇರುತ್ತದೆ. ಒಂದು ಸಕಾರಾತ್ಮಕ ಮತ್ತೊಂದು ನಕಾರಾತ್ಮಕ. ಸಕಾರಾತ್ಮಕವಾದ ವಿಚಾರ ಮಾಡುವವನು ಎಲ್ಲ ಸಂದರ್ಭವನ್ನು ಎದುರಿಸುವ ವಿಚಾರ ಮಾಡಿದರೆ ನಕಾರಾತ್ಮಕ ವಿಚಾರದವನು ತಾನೊಬ್ಬನೇ ಅಲ್ಲದೇ ತನ್ನೊಂದಿಗಿರುವ ನಾಲ್ಕಾರು ಜನರನ್ನೂ ಹೆದರಿಸುತ್ತಾನೆ ಮೊದಲು ನಾವು ಸಕಾರಾತ್ಮಕವಾಗಿ ಬದುಕೋಣ. ಬೆರೆಯವರ ಬಗೆಗೆ ನಂತರ ಯೋಚಿಸೋಣ. ಮನೆಯಲ್ಲೇ ಇರೋಣ. ಆರೋಗ್ಯವಂತರಾಗಿ ಇರೋಣ
ಬೆಂಗಳೂರಿಗರೇ ಹಾಗೆ ಬಿಟ್ಟು ಹೋದ ವಲಸೆ ಜನರ ಬಗೆಗೆ ಆಡಿ ಕೊಳ್ಳುವುದು ಅಸಮಾಧಾನ ಪಡುವುದನ್ನು ಬಿಡಿ. ಏಕೆಂದರೆ ಹಿಂದೊಮ್ಮೆ ಟ್ರಾಫಿಕ್ ಸಮಸ್ಯೆಗಾಗಿ, ಬೆಲೆ ಏರಿಕೆಗಾಗಿ, ಪರಿಸರ ಮಾಲಿನ್ಯಕ್ಕಾಗಿ ಇವರನ್ನೇ ಅಲ್ಲವೇ ದೂಷಿಸಿದ್ದು?
ಯಾವ ಯಾವ ಸಮಯಕ್ಕೆ ಏನಾಗುತ್ತದೋ ಅದನ್ನು ಎದುರಿಸಲೇ ಬೇಕು. ಕಷ್ಟದ ಸಮಯ ಬಂದಾಗ ನಮ್ಮವರೊಂದಿಗೆ ಇರಲು ಹೊರಟಿದ್ದೇವೆ ಎಂದು ಅವರು ಹೇಳಿದಾಗ ನಮ್ಮ ಜಾಗ ನಮಗೆ ಕಡಿಮೆ ಬಾಡಿಗೆಗೆ ಸಿಕ್ಕಿತು ಎಂದು ಕೊಳ್ಳಿ. ನಮ್ಮ ಓಣಿಗಳಲ್ಲಿ ವಾಹನ ಸಂಚಾರ ಕಡಿಮೆಯಾಗಿ ನಮಗೆ ಶುದ್ಧ ಗಾಳಿ ನೀರು ಸಿಕ್ಕಿತು ಎಂದು ಕೊಳ್ಳಿ.
ಜೀವನದಲ್ಲಿ ಯಾವುದೇ ಪರಿಸ್ಥಿತಿ ಬಂದಾಗ ಎಂದಿಗೂ ಎರಡು ರೀತಿಯ ಪ್ರಭಾವ ಇರುತ್ತದೆ. ಒಂದು ಸಕಾರಾತ್ಮಕ ಮತ್ತೊಂದು ನಕಾರಾತ್ಮಕ. ಸಕಾರಾತ್ಮಕವಾದ ವಿಚಾರ ಮಾಡುವವನು ಎಲ್ಲ ಸಂದರ್ಭವನ್ನು ಎದುರಿಸುವ ವಿಚಾರ ಮಾಡಿದರೆ ನಕಾರಾತ್ಮಕ ವಿಚಾರದವನು ತಾನೊಬ್ಬನೇ ಅಲ್ಲದೇ ತನ್ನೊಂದಿಗಿರುವ ನಾಲ್ಕಾರು ಜನರನ್ನೂ ಹೆದರಿಸುತ್ತಾನೆ ಮೊದಲು ನಾವು ಸಕಾರಾತ್ಮಕವಾಗಿ ಬದುಕೋಣ. ಬೆರೆಯವರ ಬಗೆಗೆ ನಂತರ ಯೋಚಿಸೋಣ. ಮನೆಯಲ್ಲೇ ಇರೋಣ. ಆರೋಗ್ಯವಂತರಾಗಿ ಇರೋಣ