Saturday, April 25, 2020

ಅಸುರಕ್ಷಿತತೆ‌ಯ ಭಾವನೆ (ಇನ್‌ ಸೆಕ್ಯೂರಡ್‌ ಫೀಲಿಂಗ್)



ಅಸುರಕ್ಷತತೆಯ ಭಾವನೆ ಯಾರಿಗೆ ಯಾಕೆ ಹೇಗೆ ಬರುತ್ತದೆ ಎಂದು ಯೋಚಿಸುವಾಗ ಬಹಳ ವಿಚಾರಗಳು ಚರ್ಚೆಗೆ ಬರುತ್ತದೆ.  ಅಸುರಕ್ಷತತೆಯ ಭಾವ ಯಾರಿಗೆ ಅಂದರೆ ಯಾವ ಯಾವ ವಯಸ್ಸಿನ ಜನರಲ್ಲಿ ನೋಡ ಬಹುದು ಎಂದು ಯೋಚಿಸುವಾಗ ಸಣ್ಣ ಮಗುವಿನಿಂದ ಹಿಡಿದು ಇಂದೋ ನಾಳೆಯೋ ಸಾಯುವ ಮುದುಕರವರಿಗೂ ಕಾಡುತ್ತದೆ. ಯಾಕೆ ಕಾಡುತ್ತದೆ ಎಂದು ಪ್ರಶ್ನೆ ಮಾಡಿಕೊಂಡಾಗ ಹಲವು ಕಾರಣಗಳಿರಬಹುದು ಅಶಕ್ತತೆ, ಆತ್ಮಬಲದ ಕೊರತೆ, ಅಸಹಾಯಕತೆ, ಗಾಬರಿ ಹೀಗೆ ಅನೇಕ ಮನಸ್ಸಿನ ಭಾವನೆಗಳು ಬರುತ್ತವೆ.  ಹೇಗೆ ಬರುತ್ತದೆ ಎಂದಾಗ ಪರಿಸ್ಥಿತಿಯ ಕಾರಣಗಳಿಂದ ಭಾವನೆಗಳ ಒತ್ತಡದಿಂದ ಉಂಟಾಗುತ್ತದೆ.

ಇಂದು ಈ ಅಸುರಕ್ಷತೆಯ ಭಾವನೆಯ ಬಗೆಗೆ ಯಾಕೆ ಮಾತು ಎಂದರೆ ಇಂದಿನ ಪರಿಸ್ಥಿತಿಯಲ್ಲಿ ಎಲ್ಲರ ಮನದಲ್ಲೂ ಅಸುರಕ್ಷತೆಯ ಭಾವನೆ ಒಂದು ಕ್ಷಣವಾದರೂ ಬಂದು ಹೋಗಿರದೇ ಇರಲಾರದು.  ಸಣ್ಣ ಮಕ್ಕಳಿಗೆ ಅಮ್ಮ ಜೊತೆಯಲ್ಲಿ ಇಲ್ಲದೇ ಹೋದಾಗ ಅವಳು ಎಲ್ಲಿ ಬಿಟ್ಟು ಹೋಗುವಳೋ ಎಂಬ ಭಯ, ಶಾಲೆಗೆ ಹೋಗುವಾಗ ಸ್ನೇಹಿತರು ಜೊತೆಗೆ ಆಡದೇ ಹೋದರೆ, ಅಧ್ಯಾಪಕರು ಕೊಟ್ಟ ಕೆಲಸ ಮಾಡದಾಗ ಬಯ್ಯುವರೆಂಬ ಅಂಜಿಕೆ, ಓದು ಮುಗಿದ ನಂತರ ಕೆಲಸದ ಚಿಂತೆ ಕೆಲಸ ಆದ ಮೇಲೆ ಮದುವೆ ಹೀಗೆ ಸಾಯುವವರೆಗೂ ಚಿಂತೆಗಳ ಸರಮಾಲೆಯು ನಡೆದೇ ಇರುತ್ತದೆ.

ಇಂದಿನ ದಿನದ ಚಿಂತೆ ಭಯವೆಂದರೆ ನಾಳೆ ಏನು? ಬದುಕುತ್ತಿವೋ ಇರುವುದಿಲ್ಲವೋ ಎಂಬ ಭಯ.  ಈ ದಿನದ ಪರಿಸ್ಥಿತಿಗೆ ಅದು ಸಹಜ ಏಕೆಂದರೆ ಅಸುರಕ್ಷತೆ ಎಲ್ಲ ಕಡೆಯೂ ತಾಂಡವವಾಡುತತಿದೆ. ಬಹಳ ದಿನ ಮನೆಯಿಂದ ಹೊರ ಬರಲೇ ಹೆದರುವ ಸಂದರ್ಭ ಬಂದಿರುವದರಿಂದ ಎಲ್ಲರೂ ಭಯಭೀತರಾಗಿದ್ದಾರೆ.

ಈ ಅಸುರಕ್ಷತೆಯ ಭಾವನೆಯಿಂದ ಹೊರಬರಲು ನಾವು ಅನುಸರಿಸಬೇಕಾದ ಮಾರ್ಗವೆಂದರೆ ಮೊದಲು ನಮ್ಮ ಮೇಲೆ ನಮಗೆ ವಿಶ್ವಾಸವಿರಲಿ, ನಮ್ಮನ್ನು ಜೀವಂತ ಇಟ್ಟಿರುವ ಭಗವಂತನ ಮೇಲೆ ನಂಬಿಕೆ ಇರಲಿ. ಜೊತೆಗೆ ಇರುವವರ ಬಗೆಗೂ ನಂಬಿಕೆ ಇರಲಿ. ಈಗಿನ ಪರಿಸ್ಥಿತಿಯಲ್ಲಿ ಎಲ್ಲರಲ್ಲೂ ಅಸ್ಥಿರತೆಯ ಭಾವನೆ ಇದ್ದೇ ಇದೆ ಹಾಗೆಂದು ಎಲ್ಲರ ಮೇಲೆ ಅನುಮಾನ ಸಲ್ಲದು, ಎಲ್ಲಕ್ಕೂ ಮೊದಲು ನಮ್ಮನ್ನು ಇಷ್ಟು ದಿನ ಕಾಪಾಡಿದ ಭಗವಂತನ ಮೇಲೆ ಶ್ರದ್ಧೆ ಇರಲಿ ಅವನು ನಮ್ಮನ್ನು ಕಾಪಾಡುತ್ತಾನೆಂಬ ನಂಬಿಕೆ ಇರಲಿ. ಮನಸ್ಸು ಒಂದು ಮರ್ಕಟದಂತೆ ಇಲ್ಲ ಸಲ್ಲದ ಅನುಮಾನಗಳು ಗಾಳಿ ಮಾತಿಗೆ ಕಿವಿಗೊಡದೇ, ನಾವು ಅನುಸರಿಸಬೇಕಾದ ಎಲ್ಲ ಮುಂಜಾಗ್ರತಾ ಕ್ರಮವನ್ನು ಅನುಸರಿಸೋಣ. ಮಾಸ್ಕ್‌ ಧರಿಸಿ ಹೊರಗೆ ಹೋಗೋಣ, ದಿನದಲ್ಲಿ ನಾಲ್ಕಾರು ಬಾರಿ ಕೈ ತೆಳೆದು ಶುದ್ಧವಾಗಿರೋಣ. ಸ್ವಚ್ಛತೆ ನಮದಷ್ಟೆ ಅಲ್ಲ ಪರಿಸರವನ್ನು ಸ್ವಚ್ಛವಾಗಿಡೋಣ.

ಕೆಲವೊಂದು ಹೇಡಿಗಳು ಆತ್ಮಹತ್ಯೆ ಅಥವಾ ಬೇರೆ ಯಾವುದೇ ರೀತಿಯ ಜೀವ ಹಾನಿ, ಮಾನಸಿಕ ಸ್ಥಿಮೀತ ಕಳೆದೊಂಡು ಒದ್ದಾಡುವದನನು ಬಿಟ್ಟು, ಸಕಾರತ್ಮಕ ಭಾವನೆಗಳನ್ನು ಜಾಗೃತಗೊಳಿಸೋಣ. ಏಲ್ಲ ಸಂದರ್ಭದಲ್ಲೂ ಆಸೆಯೇ ದುಃಖಕ್ಕೆ ಕಾರಣವಲ್ಲ, ಆದರೆ ಆಶಾ ಭಾವನೆಯೇ ಸದಾ ಕಾಲ ಉತ್ಸಾಹಕ್ಕೆ ಕಾರಣ ಜೀವನಕ್ಕೆ ಕಾರಣ ಎನ್ನಬಹುದು. 

ಮನೆಯಲ್ಲಿಯೇ ಇರಿ, ಧೈರ್ಯದಿಂದ ಇರಿ, ಸುರಕ್ಷತೆಯಿಂದ ಸುರಕ್ಷಿತವಾಗಿರಿ

ಮಾಧುರಿ

No comments:

Post a Comment