ಮುಗಿಲಾಚೆ ಬಾನಿನಲಿ
ರವಿಯ ಹೊಂಬೆಳಕಿನಲಿ
ನವಚೇತನದಲಿ
ನಲಿವ ಹಕ್ಕಿಯಾಗ ಬಯಸುವೆ ನಾ
ಸಾಗರದ ಮಡಿಲಿನಲಿ
ತೊರೆಯ ಹಾಲ್ನೊರೆಯಲಿ
ರಭಸದ ಓಟದಲಿ
ಹರಿದಾಡುವ ಮೀನಾಗ ಬಯಸುವೆ ನಾ
ಮರದಾ ಕೊಂಬೆಯಲಿ
ನಲಿದಾಡುವ ಲತೆಯಲಿ
ದುಂಬಿಯ ನೀರಿಕ್ಷೆಯಲಿ
ಪರಿಮಳದ ಪುಷ್ಪವಾಗ ಬಯಸುವೆ ನಾ
ಬ್ರಹ್ಮನ ಈ ಸೃಷ್ಟಿಯಲಿ
ಪುಣ್ಯತಾಯಿ ಭಾರತಿಯಲಿ
ಪ್ರಕೃತಿದೇವಿಯ ಆಶ್ರಯದಲಿ
ಮಾನವನಾಗ ಬಯಸುವೆ ನಾ
ರವಿಯ ಹೊಂಬೆಳಕಿನಲಿ
ನವಚೇತನದಲಿ
ನಲಿವ ಹಕ್ಕಿಯಾಗ ಬಯಸುವೆ ನಾ
ಸಾಗರದ ಮಡಿಲಿನಲಿ
ತೊರೆಯ ಹಾಲ್ನೊರೆಯಲಿ
ರಭಸದ ಓಟದಲಿ
ಹರಿದಾಡುವ ಮೀನಾಗ ಬಯಸುವೆ ನಾ
ಮರದಾ ಕೊಂಬೆಯಲಿ
ನಲಿದಾಡುವ ಲತೆಯಲಿ
ದುಂಬಿಯ ನೀರಿಕ್ಷೆಯಲಿ
ಪರಿಮಳದ ಪುಷ್ಪವಾಗ ಬಯಸುವೆ ನಾ
ಬ್ರಹ್ಮನ ಈ ಸೃಷ್ಟಿಯಲಿ
ಪುಣ್ಯತಾಯಿ ಭಾರತಿಯಲಿ
ಪ್ರಕೃತಿದೇವಿಯ ಆಶ್ರಯದಲಿ
ಮಾನವನಾಗ ಬಯಸುವೆ ನಾ
No comments:
Post a Comment